Jade Valley School

JADE VALLEY SCHOOL

MANDAGADDE

LKG to Grade VII | State Board syllabus | Global approach
Vast GREEN space for effective education
Talented, Respected and Committed Teachers
Activity based EXPERIENTIAL Learning
School designed to be RURAL students friendly

Founder's Message

Dreams…Everyone has dreams, but some set out to make their dream a reality. And some dreams can help others dream and reach their goals. I had a dream, to establish a school, which would cater to the needs of village children, enabling them, empowering them to dream their own dreams as well as give them tools they could use to make those dreams a reality. So, resigning my government job, I came to this rural area of Shimoga district and began the Lotus Education and Development Society ® to run a school we named Jade Valley School.

ಪುಟ್ಟ ಮಕ್ಕಳೊಟ್ಟಿಗೆ ಬೆರೆಯೋದೇ ಚೆಂದದ ಸಂಭ್ರಮ. ಅಂಥದೊಂದು ಅವಕಾಶ ಒದಗಿ ಬಂದಾಗ ಮಕ್ಕಳಿಗಾಗಿ ಒಪ್ಪಿಕೊಂಡು, ಜೇಡ್ ವ್ಯಾಲಿ (ಮುಡುಬ) ಶಾಲೆಗೆ ಹೋಗಿದ್ದೆ. ಮಲೆನಾಡ ಮಡಿಲಲ್ಲಿ ಖಾಸಗಿ ಶಾಲೆಯಾದರೂ ನೋಡಲಿಕ್ಕೆ ಸರ್ಕಾರಿ ಶಾಲೆಯಂತೆಯೇ ಕಾಣಿಸುತ್ತಿದ್ದ ಕಟ್ಟಡದ ಸುತ್ತ ದೊಡ್ಡ ಬಯಲೊಟ್ಟಿಗೆ ಗಿಡ ಮರಗಳ ಎಲ್ಲೆಯಿತ್ತು. ಶಾಲೆಯ ಮುಂದೆಯೇ ಮುಖ್ಯ ರಸ್ತೆ ಇದ್ದರೂ ಅದರ ಶಬ್ದ ಅಷ್ಟಾಗಿ ಕೇಳಿಸದೇ, ಶಾಲಾ ಹಿಂಬದಿಯಲ್ಲಿರುವ ಬೆಟ್ಟದಿಂದ ಮಾತ್ರ, ನವಿಲು, ಕಾಜಾಣ, ಮಿಂಚುಳ್ಳಿ, ಸಿಕಾಡಗಳ ಜೀಂಕಾರ ಮೇಳೈಸುತ್ತಿತ್ತು. ಶಾಲೆಯ ಕಿಟಿಕಿಯಿಂದ ಬೆಟ್ಟದೆಡೆಗೆ ಕಣ್ಣಾಯಿಸಿದರೆ ನವಿಲುಗಳ ನರ್ತನ ಕಾಣುತ್ತಿತ್ತು. ಎಂಥ ನಿಸರ್ಗ ಸ್ವರ್ಗದ ನಡುವೆ ಈ ಶಾಲೆಯಿದೆಯಪ್ಪ ಅನಿಸಿತು. ಹಣಕ್ಕಾಗಿ ಆಸೆಪಡದೇ ಮಕ್ಕಳ ಭವಿಷ್ಯಕ್ಕಾಗಿಯೇ ತೆರೆದ ಈ ಶಾಲೆಯ ನಿರ್ಮಾತೃರು ಜೊತೆಗೆ ಮಕ್ಕಳ ಪ್ರೀತಿಯ ಮೇಷ್ಟ್ರಾದ ಭಾಸ್ಕರ್ ಸರ್ ಹೊರಗೆ ಬಂದರು. ಪರಸ್ಪರ ಕುಶಲೋಪರಿ ಮಾತನಾಡುತ್ತಿದ್ದಾಗ ಆ ಶಾಲೆಯ ಮಾಡಿನೊಳಗೆ ಪಕ್ಷಿಯೊಂದು ಗೂಡು ಕಟ್ಟಿತ್ತು. ಕಣ್ಣರಳಿಸಿ ಇದು ಯಾವ ಪಕ್ಷಿ ಸರ್ ಎಂದೆ. ಅಲ್ಲಿಂದ್ದ ಪುಟ್ಟಾಣಿ ಮಕ್ಕಳು ತಕ್ಷಣಕ್ಕೆ ಆ ಪಕ್ಷಿ ಹೆಸರೇಳಿ, ಈ ಪಕ್ಷಿ ಗೂಡು ಕಟ್ಟಲು ಪ್ರಾರಂಭವಾದಾಗಿನಿಂದ ದಿನಾ ಇದನ್ನು ಗಮನಿಸುತ್ತಿದ್ದೇವೆ. ಇದು ಕಡ್ಡಿತರಲು ಹೋಗೋದು ವಾಪಸ್ಸು ಬರೋದು. ಗೂಡು ಕಟ್ಟಿ ಒಂದಿಷ್ಟು ದಿನಕ್ಕೆ ಮೊಟ್ಟೆ ಇಟ್ಟಿತು. ಇನ್ನೊಂದಿಷ್ಟು ದಿನ ಕಳೆಯುತ್ತಿದ್ದಂತೆ ಮರಿಮಾಡಿತು. ಈಗಾ ದಿನ ಅದಕ್ಕೆ ಆಹಾರ ಕೊಡುತ್ತಿದೆ. ಎಂದು ಒಂದೇ ಉಸಿರಿಗೆ, ಆ ಮಕ್ಕಳೇ ಖುಷಿಖುಷಿಯಿಂದ ಆ ಪಕ್ಷಿಯ ಜೀವನ ವೃತ್ತಾಂತವನ್ನೇ ತಿಳಿಸಿದರು. ಆಗಾ ಅಲ್ಲೇ ಇದ್ದ ಅವರ ಮೇಷ್ಟ್ರು ನೋಡಿ ಈ ಗೂಡಿನ ಕೆಳಗೆ ಬುಟ್ಟಿ ಇಟ್ಟಿರುವೆ. ಏಕಂದರೆ ಇದರ ಇಕ್ಕೆ ಇಲ್ಲೇ ಬೀಳುತ್ತೆ. ಇದು ನನ್ನ ರೂಮಿನ ಬಾಗಿಲಿನ ಮೇಲಕ್ಕೆ ಸರಿಯಾಗಿ ಗೂಡು ಕಟ್ಟಿದೆ. ಓಡಾಡುವವರಿಗೂ ಸ್ವಚ್ಚತೆ ಇರಲಿ ಅಂತ ಪ್ರತಿ ದಿನ ಈ ಬುಟ್ಟಿ ಕ್ಲೀನ್ ಮಾಡತ್ತೀವಿ. ನಮಗೆ ಇದರಿಂದ ಒಂದಿಷ್ಟು ಸಮಸ್ಯೆ ಅನಿಸಿದರೂ ಈ ಮಕ್ಕಳಿಗೆ ಸಿಕ್ಕಿರುವ ಈ ಪಕ್ಷಿಯ ನೇರ ಅರಿವನ್ನು ನಾವು ಕೃತಕವಾಗಿ ಸೃಷ್ಟಿಸಲು ಸಾಧ್ಯವಿಲ್ಲದ್ದು, ಜೊತೆಗೆ ಈ ಮಕ್ಕಳಿಗೆ ತರಗತಿಯೊಳಗೆ ಕಲಿಸುವುದಕ್ಕಿಂತ ಹೆಚ್ಚು ಅರ್ಥ ಪೂರ್ಣವಾದದ್ದು. ಇಂತಹ ಕಲಿಕೆ ಮಕ್ಕಳಿಗೆ ತಲುಪಿಸುವ ಅವಕಾಶ ತಾನಾಗೇ ಒದಗಿಬಂದಿರುವುದನ್ನು, ಅವರ ಅರಿವಿಗೆ ತರುವುದು ನಮ್ಮ ಕರ್ತವ್ಯ ಅಲ್ಲವೇ ಎಂದರು. ಅವರ ಮಾತು, ಆ ಮಕ್ಕಳ ನಡೆ, ಆ ಸುತ್ತಲಿನ ಪ್ರಕೃತಿ ತುಂಬಾನೇ ಖುಷಿ ನೀಡಿತು. ಇವತ್ತಿನ ದಿನಗಳಲ್ಲಿ ಮಾರ್ಕ್ಸ್ನಿಂದೆ ಓಡುತ್ತಿರುವ ಶಿಕ್ಷಣ ವ್ಯವಸ್ಥೆಯಲ್ಲಿಯೇ ಪ್ರಧಾನವಾಗಿರುವಾಗ, ಈ ಶಾಲೆಯಂತೆ ನೈಜ ಶಿಕ್ಷಣ ಮತ್ತು ಅರ್ಥ ಪೂರ್ಣ ಮೇಷ್ಟ್ರುಗಳು ಹೆಚ್ಚಾಗಬೇಕು. ಆಗಾ ಶಿಕ್ಷಣದ ನಿಜವಾದ ಅರ್ಥ ಸಕಾರವಾದೀತು ಅನಿಸತ್ತೆ.

ಎಲ್ಲರಿಗೂ ಶಿಕ್ಷಕರ ದಿನದ ಶುಭಾಶಯಗಳು….
– ಆಶಾ ಎ. ಶಿವಮೊಗ್ಗ

ಪುಟ್ಟ ಮಕ್ಕಳೊಟ್ಟಿಗೆ ಬೆರೆಯೋದೇ ಚೆಂದದ ಸಂಭ್ರಮ. ಅಂಥದೊಂದು ಅವಕಾಶ ಒದಗಿ ಬಂದಾಗ ಮಕ್ಕಳಿಗಾಗಿ ಒಪ್ಪಿಕೊಂಡು, ಜೇಡ್ ವ್ಯಾಲಿ (ಮುಡುಬ) ಶಾಲೆಗೆ ಹೋಗಿದ್ದೆ. ಮಲೆನಾಡ ಮಡಿಲಲ್ಲಿ ಖಾಸಗಿ ಶಾಲೆಯಾದರೂ ನೋಡಲಿಕ್ಕೆ ಸರ್ಕಾರಿ ಶಾಲೆಯಂತೆಯೇ ಕಾಣಿಸುತ್ತಿದ್ದ ಕಟ್ಟಡದ ಸುತ್ತ ದೊಡ್ಡ ಬಯಲೊಟ್ಟಿಗೆ ಗಿಡ ಮರಗಳ ಎಲ್ಲೆಯಿತ್ತು. ಶಾಲೆಯ ಮುಂದೆಯೇ ಮುಖ್ಯ ರಸ್ತೆ ಇದ್ದರೂ ಅದರ ಶಬ್ದ ಅಷ್ಟಾಗಿ ಕೇಳಿಸದೇ, ಶಾಲಾ ಹಿಂಬದಿಯಲ್ಲಿರುವ ಬೆಟ್ಟದಿಂದ ಮಾತ್ರ, ನವಿಲು, ಕಾಜಾಣ, ಮಿಂಚುಳ್ಳಿ, ಸಿಕಾಡಗಳ ಜೀಂಕಾರ ಮೇಳೈಸುತ್ತಿತ್ತು. ಶಾಲೆಯ ಕಿಟಿಕಿಯಿಂದ ಬೆಟ್ಟದೆಡೆಗೆ ಕಣ್ಣಾಯಿಸಿದರೆ ನವಿಲುಗಳ ನರ್ತನ ಕಾಣುತ್ತಿತ್ತು. ಎಂಥ ನಿಸರ್ಗ ಸ್ವರ್ಗದ ನಡುವೆ ಈ ಶಾಲೆಯಿದೆಯಪ್ಪ ಅನಿಸಿತು. ಹಣಕ್ಕಾಗಿ ಆಸೆಪಡದೇ ಮಕ್ಕಳ ಭವಿಷ್ಯಕ್ಕಾಗಿಯೇ ತೆರೆದ ಈ ಶಾಲೆಯ ನಿರ್ಮಾತೃರು ಜೊತೆಗೆ ಮಕ್ಕಳ ಪ್ರೀತಿಯ ಮೇಷ್ಟ್ರಾದ ಭಾಸ್ಕರ್ ಸರ್ ಹೊರಗೆ ಬಂದರು. ಪರಸ್ಪರ ಕುಶಲೋಪರಿ ಮಾತನಾಡುತ್ತಿದ್ದಾಗ ಆ ಶಾಲೆಯ ಮಾಡಿನೊಳಗೆ ಪಕ್ಷಿಯೊಂದು ಗೂಡು ಕಟ್ಟಿತ್ತು. ಕಣ್ಣರಳಿಸಿ ಇದು ಯಾವ ಪಕ್ಷಿ ಸರ್ ಎಂದೆ. ಅಲ್ಲಿಂದ್ದ ಪುಟ್ಟಾಣಿ ಮಕ್ಕಳು ತಕ್ಷಣಕ್ಕೆ ಆ ಪಕ್ಷಿ ಹೆಸರೇಳಿ, ಈ ಪಕ್ಷಿ ಗೂಡು ಕಟ್ಟಲು ಪ್ರಾರಂಭವಾದಾಗಿನಿಂದ ದಿನಾ ಇದನ್ನು ಗಮನಿಸುತ್ತಿದ್ದೇವೆ. ಇದು ಕಡ್ಡಿತರಲು ಹೋಗೋದು ವಾಪಸ್ಸು ಬರೋದು. ಗೂಡು ಕಟ್ಟಿ ಒಂದಿಷ್ಟು ದಿನಕ್ಕೆ ಮೊಟ್ಟೆ ಇಟ್ಟಿತು. ಇನ್ನೊಂದಿಷ್ಟು ದಿನ ಕಳೆಯುತ್ತಿದ್ದಂತೆ ಮರಿಮಾಡಿತು. ಈಗಾ ದಿನ ಅದಕ್ಕೆ ಆಹಾರ ಕೊಡುತ್ತಿದೆ. ಎಂದು ಒಂದೇ ಉಸಿರಿಗೆ, ಆ ಮಕ್ಕಳೇ ಖುಷಿಖುಷಿಯಿಂದ ಆ ಪಕ್ಷಿಯ ಜೀವನ ವೃತ್ತಾಂತವನ್ನೇ ತಿಳಿಸಿದರು. ಆಗಾ ಅಲ್ಲೇ ಇದ್ದ ಅವರ ಮೇಷ್ಟ್ರು ನೋಡಿ ಈ ಗೂಡಿನ ಕೆಳಗೆ ಬುಟ್ಟಿ ಇಟ್ಟಿರುವೆ. ಏಕಂದರೆ ಇದರ ಇಕ್ಕೆ ಇಲ್ಲೇ ಬೀಳುತ್ತೆ. ಇದು ನನ್ನ ರೂಮಿನ ಬಾಗಿಲಿನ ಮೇಲಕ್ಕೆ ಸರಿಯಾಗಿ ಗೂಡು ಕಟ್ಟಿದೆ. ಓಡಾಡುವವರಿಗೂ ಸ್ವಚ್ಚತೆ ಇರಲಿ ಅಂತ ಪ್ರತಿ ದಿನ ಈ ಬುಟ್ಟಿ ಕ್ಲೀನ್ ಮಾಡತ್ತೀವಿ. ನಮಗೆ ಇದರಿಂದ ಒಂದಿಷ್ಟು ಸಮಸ್ಯೆ ಅನಿಸಿದರೂ ಈ ಮಕ್ಕಳಿಗೆ ಸಿಕ್ಕಿರುವ ಈ ಪಕ್ಷಿಯ ನೇರ ಅರಿವನ್ನು ನಾವು ಕೃತಕವಾಗಿ ಸೃಷ್ಟಿಸಲು ಸಾಧ್ಯವಿಲ್ಲದ್ದು, ಜೊತೆಗೆ ಈ ಮಕ್ಕಳಿಗೆ ತರಗತಿಯೊಳಗೆ ಕಲಿಸುವುದಕ್ಕಿಂತ ಹೆಚ್ಚು ಅರ್ಥ ಪೂರ್ಣವಾದದ್ದು. ಇಂತಹ ಕಲಿಕೆ ಮಕ್ಕಳಿಗೆ ತಲುಪಿಸುವ ಅವಕಾಶ ತಾನಾಗೇ ಒದಗಿಬಂದಿರುವುದನ್ನು, ಅವರ ಅರಿವಿಗೆ ತರುವುದು ನಮ್ಮ ಕರ್ತವ್ಯ ಅಲ್ಲವೇ ಎಂದರು. ಅವರ ಮಾತು, ಆ ಮಕ್ಕಳ ನಡೆ, ಆ ಸುತ್ತಲಿನ ಪ್ರಕೃತಿ ತುಂಬಾನೇ ಖುಷಿ ನೀಡಿತು. ಇವತ್ತಿನ ದಿನಗಳಲ್ಲಿ ಮಾರ್ಕ್ಸ್ನಿಂದೆ ಓಡುತ್ತಿರುವ ಶಿಕ್ಷಣ ವ್ಯವಸ್ಥೆಯಲ್ಲಿಯೇ ಪ್ರಧಾನವಾಗಿರುವಾಗ, ಈ ಶಾಲೆಯಂತೆ ನೈಜ ಶಿಕ್ಷಣ ಮತ್ತು ಅರ್ಥ ಪೂರ್ಣ ಮೇಷ್ಟ್ರುಗಳು ಹೆಚ್ಚಾಗಬೇಕು. ಆಗಾ ಶಿಕ್ಷಣದ ನಿಜವಾದ ಅರ್ಥ ಸಕಾರವಾದೀತು ಅನಿಸತ್ತೆ.

ಎಲ್ಲರಿಗೂ ಶಿಕ್ಷಕರ ದಿನದ ಶುಭಾಶಯಗಳು….
– ಆಶಾ ಎ. ಶಿವಮೊಗ್ಗ

State level Karate Championship

Students of Jade Valley School who participated in a State level Karate championship, with their trophies. Also present is their sensei, Mr Nagendrappa and the Society secretary, Mr Bhasker Paul.

Read More »
Scroll to Top

Annual sports day on February 10th 2024